Description
ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದೊ ಸುಂದರ
ಹಿಂದು ಮುಸ್ಲಿಂ ಕ್ರೈಸ್ತರಲ್ಲಿಂಗೊಂದೆ ಭಾರತ ಮಂದಿರ
ಶಾಂತಿ ವಾತನು ಇರಿ ತಾತನು ಎದೆಯ ಬಾನಿನ ಚಂದಿರ
ಜಾತಿ ರೋಗದ ಭೀತಿ ಕಳೆಯುತ ನೀತಿ ಮಾರ್ಗದಿ ನಡೆವೆವು
ಒಂದೆ ಮಾನವ ಕುಲವು ಎನ್ನುತ ವಿಶ್ವ ಧರ್ಮವ ಪಡೆವೆವು
ವೈರ ಮತ್ತರ ಸ್ವಾರ್ಥ ವಂಚನೆ, ಕ್ರಿಮಿಗಳೆಲ್ಲವ ತೊಡೆವವು
ದೇಶ ಸೇವೆಗೆ ದೇಹ ಸವೆಸುವ ದೀಕ್ಷೆ ಇಂದೇ ತೊಡೆವವು
ನಮ್ಮ ಸುತ್ತಲು ಹೆಣೆದು ಕೊಳ್ಳಲಿ ಸ್ನೇಹ ಪಾಶದ ಬಂಧನ
ಬೆಳಕು ಬೀರಲಿ, ಗಂಧ ಹರಡಲಿ ಉರಿದು ಪ್ರೇಮದ ಚಂದನ
ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ ದೇಶವಾಗಲಿ ನಂದನ
ಅಂದು ಪ್ರೇಮದಿ ಎತ್ತಿಕೊಳ್ಳಲಿ ಭೂಮಿ ತನ್ನಯ ಕಂದನ
-ಶಂ. ಗು. ಬಿರಾದಾರ